ಜೈನ ಧರ್ಮ: ೬೩ ಒಳನೋಟಗಳು,
ಆಂಗ್ಲ ಮೂಲ: ದೇವದತ್ತ ಪಟ್ಟನಾಯಕ, ಕನ್ನಡಕ್ಕೆ: ಪದ್ಮರಾಜ ದಂಡಾವತಿ
ಅಹಿಂಸೆ, ಅಪರಿಗ್ರಹ ಮತ್ತು ಅನೇಕಾಂತವಾದದಂಥ ಅನನ್ಯ ಬೋಧನೆಗಳ ಮೂಲಕ ಇಡೀ ಜಗತ್ತಿಗೆ ಶಾಂತಿಯ ದಾರಿ ತೋರಿಸಿದ ಜೈನ ಧರ್ಮವು ಭಾರತದ ಪುರಾತನ ಧರ್ಮಗಳಲ್ಲಿ ಒಂದು. ಭಾರತದ ಇತರ ಮತ್ತು ಪಾಶ್ಚಾತ್ಯ ಧರ್ಮಗಳ ತುಲನೆಯಲ್ಲಿ ಜೈನ ಧರ್ಮದ ಉನ್ನತ ಸ್ಥಾನಮಾನ ಗುರುತಿಸುವ
ಈ ಪುಸ್ತಕ ಕನ್ನಡದ ಓದುಗರಿಗೆ ಒಂದು ಅಪೂರ್ವ ಕೊಡುಗೆ. ಜೈನ ಧರ್ಮದಲ್ಲಿ ೬೩ ಜನ ಶಲಾಕಾ ಪುರುಷರಿದ್ದಾರೆ. ಅದಕ್ಕಾಗಿಯೇ ಈ ಕೃತಿ ೬೩ ಅಧ್ಯಾಯಗಳಲ್ಲಿ ವಿಸ್ತರಿಸಿದೆ. ಜೈನ ಧರ್ಮದಲ್ಲಿ ಮತ್ತು ಧರ್ಮಗಳಲ್ಲಿ ಆಸಕ್ತಿ ಇರುವ ಯಾರೇ ಆದರೂ ಈ ಕೃತಿಯನ್ನು ಓದಬೇಕು. ದೇವದತ್ತ ಪಟ್ಟನಾಯಕರ ಈ ಅದ್ಭುತ ಕೃತಿಯನ್ನು ಪದ್ಮರಾಜ ದಂಡಾವತಿಯವರು ಅಷ್ಟೇ ಅನುಪಮವಾಗಿ ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ.
********************************************************
ರಾಮಾಯಣ ಮಹಾಭಾರತ ಮುಖಾಮುಖಿ: ಕೌತುಕದ ತುಲನೆ
ಆಂಗ್ಲ ಮೂಲ: ದೇವದತ್ತ ಪಟ್ಟನಾಯಕ, ಕನ್ನಡಕ್ಕೆ: ಪದ್ಮರಾಜ ದಂಡಾವತಿ
ಭಾರತದ ಮಾತ್ರವಲ್ಲ ಜಗತ್ತಿನ ಎರಡು ಶ್ರೇಷ್ಠ ಮಹಾಕಾವ್ಯಗಳು ಎಂದರೆ ಅವು ʻರಾಮಾಯಣʼ ಮತ್ತು ʻಮಹಾಭಾರತʼ. ಈ ಎರಡೂ ಕಾವ್ಯಗಳನ್ನು ಮುಖಾಮುಖಿಯಾಗಿಸಿ ಅವುಗಳಲ್ಲಿನ ಸಮಾನ ಅಂಶಗಳನ್ನು ಕುರಿತು ಬರೆದ ಏಕೈಕ ಕೃತಿ ಇದು.
ಆಸೆಯ ಕೇಡನ್ನು ಶೋಧಿಸುವ ʻರಾಮಾಯಣʼ ಮತ್ತು ಸೇಡಿನ ಅಥವಾ ದ್ವೇಷದ ಕೇಡನ್ನು ತೆರೆದು ಇಡುವ ʻಮಹಾಭಾರತʼ ಕೃತಿಗಳನ್ನು ದೇವದತ್ತ ಪಟ್ಟನಾಯಕರು ಅರ್ಥೈಸಿದ ರೀತಿ ಗಹನವಾಗಿದೆ, ಅನ್ಯಾದೃಶವಾಗಿದೆ. ಈ ಮಹತ್ವದ ಕೃತಿಯನ್ನು ಪದ್ಮರಾಜ ದಂಡಾವತಿಯವರು ಅಷ್ಟೇ ತನ್ಮಯತೆಯಿಂದ ಕನ್ನಡಕ್ಕೆ ತಂದಿದ್ದಾರೆ.